ಎಚ್ಕೆವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಲತಾ ಅಭಿಪ್ರಾಯ
ಕೆ.ಎಂ.ದೊಡ್ಡಿ: ಮಹಿಳೆಯರು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿದಾಗ ಮಾತ್ರ ಸಬಲತೆ ಸಾಧಿಸಲು, ಸ್ವಾವಲಂಭಿ ಜೀವನ ನಡೆಸಲು ಸಾಧ್ಯ ಎಂದು ಮದ್ದೂರಿನ ಎಚ್ಕೆವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಲತಾ ತಿಳಿಸಿದರು.
ಇಲ್ಲಿನ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜಿ.ಮಾದೇಗೌಡ ಇನ್ಸಿಟಿಟ್ಯೂಟ್ ಆಫ್ ಫಾರ್ಮಾಸ್ಯಟಿಕಲ್ ಸೈನ್ಸ್ಸ್ ವತಿಯಿಂದ ಮಹಿಳಾ ಸಬಲೀಕರಣ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಗಾರದಲ್ಲಿ ಅಭಿನಂಧನೆ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬ ಮಹಿಳೆಯಲ್ಲೂ ಒಬ್ಬ ಸಾಧಕಿ ಇರುತ್ತಾಳೆ. ಹೆಣ್ಣು ಜನಿಸಿದರೆ ಮನೆಗೆ ಲಕ್ಷ್ಮೀ ಬಂದಂತೆ. ದುಡಿಯುವ ವಿಚಾರ ಬಂದಾಗ ಮಹಿಳೆಯರೇ ಎತ್ತಿದ ಕೈ ಕೇವಲ ಓದಿದರೆ ಸಾಲದು. ಓದಿನ ಹಿಂದಿನ ಮಹತ್ವ ಅರಿತು ಪ್ರಥಮವಾಗಿ ಉನ್ನತ ಹುದ್ದೆ ಅಲಂಕರಿಸಿ ಸಮಾಜಕ್ಕೆ ಒಳಿತು ಮಾಡಿದಾಗ ಮಾತ್ರ ಸಬಲರಾದಂತೆ ಎಂದು ಕಿವಿ ಮಾತು ಹೇಳಿದರು.
ಮಹಿಳೆಯರು ಯಾವಾಗಲೂ ಸಬಲರೆ. ಮಹಿಳೆಗೆ ಹಿಂದಿನಿಂದಲೂ ಅಡುಗೆ ಮನೆಯನ್ನು ಕೊಟ್ಟಿದ್ದೆ ಮಹಿಳೆ ಸಬಲೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಸ್ವಾವಲಂಭಿಗಳಾಗಿ ಮಾಡಲು ಯಾರಿಗೂ ಕಾಣದಂತೆ ಶ್ರಮ ವಹಿಸಿದ್ದಾರೆ. ಶ್ರಮ ಸಾರ್ಥಕತೆ ಪಡೆಯಬೇಕಾದರೆ ಮಹಿಳೆಯರು ಉನ್ನತ ಶಿಕ್ಷಣ ಪಡೆದು ಸ್ವಾವಾವಲಂಭಿಗಳಾದಾಗ ಮಾತ್ರ ಸಾಧ್ಯ. ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀ ಹೆಲ್ತ್ ಸೈನ್ಸ್ಸ್ ನಿರ್ದೇಶಕ ಡಾ. ತಮಿಜ್ಮಣಿ ಮಾತನಾಡಿ, ಹೆಣ್ಣು ಎಲ್ಲ ಕ್ಷೇತ್ರದಲ್ಲೂ ತನ್ನ ಚಾಪನ್ನು ಮೂಡಿಸಿದ್ದಾರೆ ನಾನು ವ್ಯಾಸಂಗ ಮಾಡುತಿದ್ದ ವೇಳೆ ಒಂದು ತರಗತಿಗೆ ಒಬ್ಬರೋ ಇಬ್ಬರೋ ವಿದ್ಯಾರ್ಥಿನಿಯರು ಇರುತಿದ್ದರು ಆದರೆ ಪ್ರಸ್ತುತ ವಿದ್ಯಾರ್ಥಿಗಿಂತ ವಿದ್ಯಾರ್ಥಿನಿಯರೇ ಹೆಚ್ಚದ್ದಾರೆ ಉತ್ತಮ ಶಿಕ್ಷಣ ಪಡೆಯುತಿದ್ದಾರೆ ಎಂದು ಮೆಲಕು ಹಾಕಿದರು.
ಭಾರತೀ ಔಷಧ ವಿಜ್ಞಾನ ಕಾಳೆಜಿನ ಪ್ರಾಂಶುಪಾಲ ಡಾ.ಟಿ. ಬಾಲಸುಬ್ರಮಣ್ಯಂ, ಜಿ.ಮಾದೇಗೌಡ ಇನ್ಸ್ಟ್ಯೂಟ್ ಆಫ್ ಫಾರ್ಮಾಸ್ಯಟಿಕಲ್ ಸೈನ್ಸ್ಸ್ ಪ್ರಾಂಶುಪಾಲ ಡಾ.ಜಗದೀಶ್ ಸೇರಿದಂತೆ ಮತ್ತಿತರಿದ್ದರು.

