PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಡಾ.ಸಿ.ಎನ್. ಮಂಜುನಾಥ್ ಗೆ ದಾಖಲೆ ಮತಗಳ ಅಂತರದ ಗೆಲುವು
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಸಮಗ್ರ > ಡಾ.ಸಿ.ಎನ್. ಮಂಜುನಾಥ್ ಗೆ ದಾಖಲೆ ಮತಗಳ ಅಂತರದ ಗೆಲುವು
ಸಮಗ್ರ

ಡಾ.ಸಿ.ಎನ್. ಮಂಜುನಾಥ್ ಗೆ ದಾಖಲೆ ಮತಗಳ ಅಂತರದ ಗೆಲುವು

ಪ್ರತಿನಿಧಿ
Last updated: June 5, 2024 7:59 pm
ಪ್ರತಿನಿಧಿ
Published June 5, 2024
Share
SHARE

ರಾಮನಗರ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಸಿ.ಎನ್. ಮಂಜುನಾಥ್ ಅವರು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಡಾ.ಸಿ.ಎನ್. ಮಂಜುನಾಥ್ ಅವರು 1079002 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ 809355 ಮತಗಳನ್ನು ಪಡೆದಿದ್ದಾರೆ. ಡಾ.ಸಿ.ಎನ್. ಮಂಜುನಾಥ್ ಅವರು ಡಿ.ಕೆ. ಸುರೇಶ್ ಅವರಿಗಿಂತ 269647 ಮತಗಳ ಅಂತರದಿಂದ ಜಯಶೀಲರಾದರು. ಕಣದಲ್ಲಿ 15 ಅಭ್ಯರ್ಥಿಗಳಿದ್ದರು. ನೋಟಾಗೆ 10649 ಮತಗಳು ಬಿದ್ದಿವೆ.

ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯಿತು. ಕಾಲೇಜಿನ ಸುತ್ತಮುತ್ತ ಹಾಗೂ ಹೆದ್ದಾರಿ ರಸ್ತೆ ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಕಾಲೇಜು ಹೊರ ಆವರಣದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡಲಾಯಿತು. ಅಭ್ಯರ್ಥಿಗಳು, ಚುನಾವಣಾಧಿಕಾರಿಗಳು, ಮತ ಎಣಿಕೆ ಸಿಬ್ಬಂದಿ ಮತ್ತು ಏಜೆಂಟರನ್ನು ಹೊರತು ಪಡಿಸಿ ಬೇರಾರಿಗೂ ಮತ ಎಣಿಕೆ ಕೇಂದ್ರದೊಳಕ್ಕೆ ಪ್ರವೇಶ ನೀಡಲಿಲ್ಲ. ಮಾಧ್ಯಮದವರಿಗೂ ಈ ನಿಯಮ ಕಡ್ಡಾಯಗೊಳಿಸಲಾಗಿತ್ತು.

- ಜಾಹೀರಾತು -

ಕಾಲೇಜಿನ ಆವರಣಕ್ಕೆ ಆಗಮಿಸಿದ ಜನರು ಚುನಾವಣಾ ಫಲಿತಾಂಶದ ಬಗ್ಗೆ ಗುಂಪು ಗುಂಪಾಗಿ ಮಾತನಾಡಿಕೊಳ್ಳುತ್ತಿದ್ದರು. ಪ್ರತಿ ಸುತ್ತಿನ ಫಲಿತಾಂಶವನ್ನು ಧ್ವನಿವರ್ಧಕದ ಮೂಲಕ ಬಿತ್ತರಿಸಿದಾಗ ನೆರೆದಿದ್ದ ಕಾರ್ಯಕರ್ತರು ತಮ್ಮ ಪಕ್ಷ ಹಾಗೂ ಅಭ್ಯರ್ಥಿ ಹೆಸರನ್ನು ಹೇಳುವ ಮೂಲಕ ಜೋರಾಗಿ ಘೋಷಣೆಗಳನ್ನು ಕೂಗಿ, ಸಂಭ್ರಮಿಸಿದರು.

ಮತ ಎಣಿಕೆಯ ಕೇಂದ್ರದ ಮುಂಭಾಗ ಜೆಡಿಎಸ್-ಬಿಜೆಪಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೆರಳೆಣಿಕೆಯಷ್ಟು ಇದ್ದರಾದರೂ ತಟಸ್ಥರಾಗಿದ್ದರು.

ಹಲವು ಮಂದಿ ಧ್ವನಿವರ್ಧಕದ ಮೂಲಕ ಫಲಿತಾಂಶವನ್ನು ಪ್ರಕಟಿಸುತ್ತಿದ್ದಂತೆ ಅದನ್ನು ಮೊಬೈಲ್ ಮೂಲಕ ಇತರರಿಗೆ ತಿಳಿಸುತ್ತಿದ್ದರು. ಇನ್ನು ಕೆಲವರು ಫಲಿತಾಂಶವನ್ನು ವೀಕ್ಷಿಸುವ ಸಲುವಾಗಿ ಮೊಬೈಲ್‌ಗಳಲ್ಲಿ ಮುಳುಗಿ ಹೋಗಿದ್ದರು. ಮತ ಎಣಿಕೆ ಕೇಂದ್ರದ ಆವರಣದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂಬುದೆ ಚರ್ಚೆಯ ವಿಷಯವಾಗಿತ್ತು.

ಮಧ್ಯಾಹ್ನ 3 ಗಂಟೆ ವೇಳೆಗೆ ಫಲಿತಾಂಶ ಪ್ರಕಟಗೊಂಡ ಬಳಿಕ ಕಾಲೇಜಿನ ಆವರಣದಿಂದ ಎಲ್ಲರೂ ಎಲ್ಲಿ ಮತ ಜಾಸ್ತಿ ಬಂದಿದೆ, ಕಡಿಮೆ ಬಂದಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದರು. ಮತ ಎಣಿಕೆಯ ಪ್ರಾರಂಭ ಹಂತದಿಂದಲೂ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಮುನ್ನಡೆ ಸಾಧಿಸುತ್ತಾ ಬಂದರು. ಮಂಜುನಾಥ್ ಅವರ ಗೆಲುವು ಖಚಿತವಾಗುತ್ತಿದ್ದಂತೆ ಬಿಜೆಪಿ-ಜೆಡಿಎಸ್ ಮುಖಂಡರು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡರು.

 

ಕ್ಷೇತ್ರ                          ಡಾ.ಸಿ.ಎನ್. ಮಂಜುನಾಥ್              ಡಿ.ಕೆ. ಸುರೇಶ್

ಕುಣಿಗಲ್                    97248                                        73410

ರಾಜರಾಜೇಶ್ವರಿನಗರ  188726                                      89729

ಬೆಂಗಳೂರು ದಕ್ಷಿಣ   255756                                      158627

ಆನೆಕಲ್                    137693                                       115328

ಮಾಗಡಿ                     113911                                       83938

ರಾಮನಗರ                91945                                         92090

ಕನಕಪುರ                  83303                                                108980

ಚನ್ನಪಟ್ಟಣ            106971                                                85357

ಅಂಚೆ ಮತಗಳು       3449                                                    1896

ಒಟ್ಟು ಮತಗಳು       1079002                                             809355

 

 

ಅಭ್ಯರ್ಥಿ                                     ಪಕ್ಷ                            ಪಡೆದ ಮತಗಳು

ಡಾ.ಸಿ.ಎನ್. ಮಂಜುನಾಥ್       ಬಿಜೆಪಿ                                  1079002

ಡಿ.ಕೆ. ಸುರೇಶ್                          ಕಾಂಗ್ರೆಸ್                                  809355

ಅಭಿಷೇಕ್.ಕೆ             ಉತ್ತಮ ಪ್ರಜಾಕೀಯ ಪಾರ್ಟಿ                     6202

ಸುರೇಶ್ ಎಂ.ಎನ್.    ಪಕ್ಷೇತರ ಅಭ್ಯರ್ಥಿ                                     3236

ಹೇಮಾವತಿ .ಕೆ  ಸೋಷಿಯಲಿಸ್ಟ್ ಯುನಿಟಿ ಸೆಂಟರ್                     1774

ಆಫ್ ಇಂಡಿಯಾ (ಕಮ್ಯುನಿಸ್ಟ್)

ಜೆ.ಟಿ. ಪ್ರಕಾಶ್           ಪಕ್ಷೇತರ ಅಭ್ಯರ್ಥಿ                                     1472

ಎನ್. ಕೃಷ್ಣಪ್ಪ   ಪಿರಮಿಡ್ ಪಾರ್ಟಿ ಆಫ್ ಇಂಡಿಯಾ                 1402

ಸಿ.ಎನ್. ಮಂಜುನಾಥ್ ಬಹುಜನ್ ಭಾರತ್ ಪಾರ್ಟಿ                    1400

ಕುಮಾರ್. ಎಲ್   ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ                1066

ಮಹಮದ್ ಮುಸದಿಕ್ ಪಾಷಾ ಕರ್ನಾಟಕ ರಾಷ್ಟ್ರ ಸಮಿತಿ          821

ನರಸಿಂಹಮೂರ್ತಿ.ಜೆ.ಪಿ.    ಪಕ್ಷೇತರ ಅಭ್ಯರ್ಥಿ                           813

ಸುರೇಶ್. ಎಸ್.           ಕರುನಾಡು ಪಾರ್ಟಿ                                 798

ವಸಿಸ್ಟ್. ಜೆ.                ಕಂಟ್ರಿ ಸಿಟಿಜನ್ ಪಾರ್ಟಿ                           584

ಮೊಹಮ್ಮದ್ ದಸ್ತಗೀರ್ ಯಂಗ್ ಸ್ಟರ್ ಎಂಪಾವರ್ಮೆಂಟ್ ಪಾರ್ಟಿ  486

ಎಚ್.ವಿ. ಚಂದ್ರಶೇಖರ್ ವಿಡುತಲೈ ಚಿರುತೈಗಲ್ ಕಚ್ಚಿ                480

ನೋಟಾ                                                                                   10649

ಒಟ್ಟು                                                                                    1919540

 

ವಿಜೇತ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು

 

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಅಂಕಣಸಮಗ್ರ

ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ವಿದೇಶಿ ಕೋರ್ಟ್ ಮೊರೆ ಹೋದ ಪೊಲೀಸರು

December 21, 2023
ಸಮಗ್ರ

ಡಿಎಚ್‌ಒ ನೇತೃತ್ವದಲ್ಲಿ ಅಂಗಡಿಗಳ ಮೇಲೆ ಕೋಟ್ಪ ದಾಳಿ

March 21, 2024
ಸಮಗ್ರ

ಬೃಹತ್ ಮೆರವಣಿಗೆಯೊಂದಿಗೆ ರಕ್ಷ ರಾಮಯ್ಯ ನಾಮಪತ್ರ

April 3, 2024
ಸಮಗ್ರ

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಅಲೆ

April 18, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?