PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಕರ್ನಾಟಕಕ್ಕೆ ಬರ ಪರಿಹಾರ ಘೋಷಿಸಿದ ವಿಚಾರ ನಾಳೆ ಬೆಂಗಳೂರಿನಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಬೆಂಗಳೂರು > ಕರ್ನಾಟಕಕ್ಕೆ ಬರ ಪರಿಹಾರ ಘೋಷಿಸಿದ ವಿಚಾರ ನಾಳೆ ಬೆಂಗಳೂರಿನಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರುಮುಖಪುಟರಾಜಕೀಯ

ಕರ್ನಾಟಕಕ್ಕೆ ಬರ ಪರಿಹಾರ ಘೋಷಿಸಿದ ವಿಚಾರ ನಾಳೆ ಬೆಂಗಳೂರಿನಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Prathinidhi News
Last updated: April 28, 2024 9:53 am
Prathinidhi News
Published April 28, 2024
Share
SHARE

ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ಹಣ ಕಡಿಮೆ ಬಿಡುಗಡೆ ಮಾಡಿದ್ದು, ಈ ಹಿನ್ನಲೆ ಏ.28 ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ‘ನಮ್ಮ ಹೋರಾಟ ನ್ಯಾಯಾಲಯದಲ್ಲಿ ಮುಂದುವರಿಯುತ್ತೆ, ನಾವು 18 ಸಾವಿರ ಕೋಟಿಯಲ್ಲಿ ಕನಿಷ್ಠ 50% ಕೇಳಿದ್ವಿ, ಆದರೆ ಈಗಿನ ಪರಿಹಾರ ಆನೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ನಾವು ಕೇಂದ್ರ ಸರ್ಕಾರ ಬಳಿ ಭಿಕ್ಷೆ ಕೇಳೋಕೆ ಹೋಗಿದ್ವಾ?, ಬರ ಪರಿಹಾರ ಬಿಡುಗಡೆ ಕೇಂದ್ರ ಸರ್ಕಾರದ ಕರ್ತವ್ಯ ಎಂದು ಕಿಡಿಕಾರಿದ್ದಾರೆ.

‘ಬರಗಾಲದ ಪರಿಸ್ಥಿತಿ ಬಗ್ಗೆ ಗೊತ್ತಿದೆ. 123 ತಾಲ್ಲೂಕಿನಲ್ಲಿ 122 ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಸಮಸ್ಯೆ ಆಗಿರಲಿಲ್ಲ. 46.9 ಲಕ್ಷ ಹೆಕ್ಟರ್ ಕೃಷಿ ಭೂಮಿ‌ ನಷ್ಟ ಆಗಿದೆ. 223 ತಾಲ್ಲೂಕುಗಳನ್ನ ಬರಗಾಲ‌ ಎಂದು ಘೋಷಿಸಿದ್ದೇವೆ. ನಾವು ಮನವಿ ಕೊಟ್ಟಾಗ 35 ಸಾವಿರ ಕೋಟಿಗೂ ಅಧಿಕ‌ ಹಣ ನಷ್ಟವಾಗಿದೆ. ಜೊತೆಗೆ 29 ಜಿಲ್ಲೆಗಳಲ್ಲಿ‌ ಆದ ತೊಂದರೆಯನ್ನ ಕಮೀಟಿ ಗಮನಿಸಿದೆ. ಕೇಂದ್ರಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ತಿಳಿಸಲು‌ 2023 ಅಕ್ಟೋಬರ್​ 24ರಂದು ರಾಜ್ಯದ ಸಚಿವರುಗಳಾದ ಕೃಷಿ ಮತ್ತು ಕಂದಾಯ‌‌ ಸಚಿವರು ಹೋಗಿದ್ದರೆ, ಡಿಸೆಂಬರ್19ರಂದು ಸಿಎಂ, ಕಂದಾಯ ಸಚಿವರು ಇಬ್ಬರೂ ಭೇಟಿ ಮಾಡಿದ್ದರು. ಜ.20ರಂದು ಸಿಎಂ ಮತ್ತೆ ಪ್ರಧಾನಿಗಳ ಬಳಿ ಮನವಿ ಇಟ್ಟರು. ಮಾರ್ಗಸೂಚಿ ಅನ್ವಯ ನಾವು ಮನವಿ ಸಲ್ಲಿಸಿದ್ದೆವು ಎಂದರು.

ಇನ್ನು ನರೇಗಾದಲ್ಲಿ 100 ದಿನ ಹೆಚ್ಚುವರಿ ಉದ್ಯೋಗ ಕೊಡುವ ಕೆಲಸ ಮಾಡಲಿಲ್ಲ, ಇದು ಖಂಡನೀಯ. ನಿಮ್ಮ ಸಮಯ ಕ್ಲೋಸ್ ಆಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರ ಮೋಸ ಮಾಡಿದೆ. 35 ಸಾವಿರ ಕೋಟಿ ನಷ್ಟ ಆಗಿದ್ದರೆ, 18 ಸಾವಿರ ಕೋಟಿಗೆ ನಾವು ಮನವಿ ಮಾಡಿದ್ದೇವು. ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ನಮಗೆ ಅನಿವಾರ್ಯ ಆಯ್ತು. ಕೇಂದ್ರ ಸರ್ಕಾರದ ವಕೀಲರು ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದ್ದಾರೆ. ಅನ್ಯಾಯ ಆಗುತ್ತಿರುವ ಬಗ್ಗೆ ಅವರು ಹೇಳಿದ್ದಾರೆ. ನಮಗೆ 3,454 ಕೋಟಿ ರೂ. ಕೊಟ್ಟಿದ್ದಾರೆ, ಪತ್ರ ಈಗ ತಲುಪಿದೆ. ಖಾತೆಗೆ ಯಾವಾಗ ಜಮಾ ಆಗುತ್ತೆ ಅನ್ನೋದು ಗೊತ್ತಿಲ್ಲ. ಇದು‌ ರಾಜಕೀಯ ಅಲ್ಲ, ರಾಜ್ಯಕ್ಕೆ ಆಗುತ್ತಿರುವ ದೊಡ್ಡ ದ್ರೋಹ, ರಾಜ್ಯದ ಹಿತಕ್ಕೆ ಕೇಂದ್ರ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ವಿರುದ್ದ ವಾಗ್ದಾಳಿ

ಇದೇ ವೇಳೆ ಭದ್ರಾ ಯೋಜನೆಯಲ್ಲಿ ಪಿಎಂ, ನಿರ್ಮಲಾ ಸೀತಾರಾಮ್ ಕೇಂದ್ರದ ಬಜೆಟ್ ಪಾಸ್ ಮಾಡಿದ್ದಾರೆ. 5300 ಕೋಟಿ ಯಾಕೆ ಬಿಡುಗಡೆ ಮಾಡಿಲ್ಲ?, ಇದಕ್ಕೆ ಏನು ಉತ್ತರ ಕೊಡ್ತೀರಿ, ಮಹದಾಯಿ, ಎತ್ತಿನಹೊಳೆ ಯೋಜನೆ ರಾಷ್ಟ್ರೀಯ ಮಾಡಿ ಅಂದಿದ್ದೇವೂ, ಯಾಕೆ‌ ಮಾಡಲಿಲ್ಲ. ಮೇಕೆದಾಟು, ಎತ್ತಿನಹೊಳೆಯ ಬಗ್ಗೆ ಕುಮಾರಸ್ವಾಮಿ ಮಾತಾಡಿದ್ದಾರೆ, ‘ನೀವು ಬಿಜೆಪಿ ಜೊತೆ ಸೇರಿದ್ದೀರಲ್ಲ ಅವರ ಜೊತೆ ಮೊದಲೇ ಮಾತಾಡಬೇಕಿತ್ತಲ್ಲ. ಈಗ ತಂದೆ- ಮಗ ನಾವು ಮಾಡಿಸುತ್ತೀವಿ ಹೋಪ್ ಕೊಡಿ ಅಂತ ಕೇಳುತ್ತಿದ್ದಾರೆ. ಅಧಿಕಾರ ಕೊಟ್ರೆ ಇವರಿಗೆ ರಾಜ್ಯದ ಹಿತ, ಇಲ್ಲಾಂದ್ರೆ ರಾಜ್ಯದ ಹಿತ ಇಲ್ಲ ಎಂದು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಬೆಂಗಳೂರುಮುಖಪುಟ

ಬೈಕ್‌ ಟ್ಯಾಕ್ಸಿ ಸಂಚಾರ ಗೊಂದಲ : ಅಂತೆಕಂತೆಗಳಿಗೆ ತೆರೆಎಳೆದ ಕರ್ನಾಟಕ ಹೈಕೋರ್ಟ್

August 22, 2025
ದಸರಾ ಮಹೋತ್ಸವಮುಖಪುಟಮೈಸೂರು ನಗರ

ಕ್ಯಾಪ್ಟನ್‌ ಅಭಿಮನ್ಯು ಅಂಡ್‌ ಟೀಂ ಗೆ ಇನ್ಶೂರೆನ್ಸ್‌ : ಡಿಸಿಎಫ್‌ ಡಾ ಪ್ರಭುಗೌಡ ಮಾಹಿತಿ

August 8, 2025
ಮುಖಪುಟ

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಹಣೆಯ ಸ್ಪರ್ಶಿಸಿದ ಸೂರ್ಯರಶ್ಮಿ

April 17, 2024
ಚಾಮರಾಜನಗರಮುಖಪುಟ

ಗಡಿಜಿಲ್ಲೆಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ; ಹೊಗೆನಕಲ್‌ ಫಾಲ್ಸ್‌ ನಲ್ಲಿ ತೆಪ್ಪ ಸಂಚಾರ ಸ್ಥಗಿತ!

October 29, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?