ಬೆಂಗಳೂರು: ‘ವೀರಶೈವ ಸಮುದಾಯ ಕಡೆಗಣನೆ ವಿಚಾರ ಗಂಭೀರವಾಗಿ ಪರಿಗಣಿಸಿ ಎಂಬ ಮಾಜಿ ಸಿಎಂ ಬಿಎಸ್ವೈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ‘ ಇದು ಜಾತ್ಯಾತೀತ ಸರ್ಕಾರ, ಯಾರಿಗೂ ತೊಂದರೆ ಆಗೋದಿಲ್ಲ. ಶಕ್ತಿ ಯೋಜನೆ ಬರೀ ಒಂದು ಸಮುದಾಯಕ್ಕೆ ತಂದಿದ್ದೀವಾ? ಜಾತ್ಯಾತೀತ ಯೋಜನೆ ಅದು. ಅನ್ನ ಭಾಗ್ಯ, ಗೃಹ ಜ್ಯೋತಿ ,ಗೃಹ ಲಕ್ಷ್ಮಿ ಇದಕ್ಕೆ ಜಾತಿ ಇದೆಯಾ? ಎಲ್ಲಾ ಜಾತಿಯನ್ನ ಸಮಾನವಾಗಿ ನೋಡೋದು ನಮ್ಮ ಸರ್ಕಾರ ಎಂದರು.
