PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಬನ್ನೂರಿನಲ್ಲಿ ಶ್ರೀ ಕೋದಂಡರಾಮದೇವರ ಬ್ರಹ್ಮ ಮಹಾರಥೋತ್ಸವ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮೈಸೂರು ಗ್ರಾಮಾಂತರ > ಬನ್ನೂರಿನಲ್ಲಿ ಶ್ರೀ ಕೋದಂಡರಾಮದೇವರ ಬ್ರಹ್ಮ ಮಹಾರಥೋತ್ಸವ
ಮೈಸೂರು ಗ್ರಾಮಾಂತರ

ಬನ್ನೂರಿನಲ್ಲಿ ಶ್ರೀ ಕೋದಂಡರಾಮದೇವರ ಬ್ರಹ್ಮ ಮಹಾರಥೋತ್ಸವ

ಪ್ರತಿನಿಧಿ
Last updated: April 25, 2024 7:21 pm
ಪ್ರತಿನಿಧಿ
Published April 25, 2024
Share
SHARE

.

ಪ್ರತಿನಿಧಿ ವರದಿ ಬನ್ನೂರು

ಪಟ್ಟಣದ ಶ್ರೀ ಕೋದಂಡರಾಮದೇವರ ಬ್ರಹ್ಮ ಮಹಾರಥೋತ್ಸವ ಬುಧವಾರ ಅದ್ದೂರಿಯಾಗಿ ಭಕ್ತರ ಸಮ್ಮುಖದಲ್ಲಿ ನಡೆಯಿತು.

ಬೆಳಗ್ಗೆ ಪ್ರಾತಃ ಕಾಲದಲ್ಲಿ ದೇವರಿಗೆ ಹೋಮ ಹವನವನ್ನು ನೆರವೇರಿಸಿ, ಪಾದುಕೆಯನ್ನು ರಥೋತ್ಸವ ಸಾಗುವ ಬೀದಿಯಲ್ಲಿ ಶಾಸ್ತ್ರೋಕ್ತವಾಗಿ ಮೆರವಣಿಗೆ ಮಾಡಿ, ನಂತರ ಮಂಗಳವಾದ್ಯದೊಂದಿಗೆ ಶುಭಲಗ್ನದಲ್ಲಿ ತಳಿರು ತೋರಣದಿಂದ ಹೂವಿನ ಬಾವುಟಗಳಿಂದ ಸಿಂಗಾರಗೊಂಡಿದ್ದ ರಥದ ಮೇಲೆ ಸ್ಥಾಪಿಸಲಾಯಿತು.

- ಜಾಹೀರಾತು -

ನಂತರ ರಥಕ್ಕೆ ಚಾಲನೆ ನೀಡಲಾಯಿತು. ನೂರಾರು ಜನರು ಸೇರಿ ರಥದ ಹಗ್ಗವನ್ನು ಎರಡು ಕಡೆಯಿಂದ ಹಿಡಿದು ಘೋಷಣೆಗಳನ್ನು ಕೂಗುತ್ತಾ ರಥವನ್ನು ಎಳೆದರು.

ದೇವಾಲಯದ ಸ್ವಸ್ಥಾನದಿಂದ ಹೊರಟ ರಥ, ರಥದ ಬೀದಿಯ ಮೂಲಕ ಸಾಗಿ, ಹಳೇ ಪುರಸಭಾ ರಸ್ತೆಯಲ್ಲಿ ಬಂದು ದೊಡ್ಡ ಅಂಗಡಿ ಬೀದಿಯ ಮುಖಾಂತರ ದೇವಾಲಯವನ್ನು ಸೇರಿತು. ದಾರಿಯುದ್ದಕ್ಕೂ ಭಕ್ತರು ಹಣ್ಣು ಜವನ ಎಸೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ನಂತರ ದೇವಾಲಯದಲ್ಲಿ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನಡೆಯಿತು. ಅರ್ಚಕರಾದ ಕೃಷ್ಣಸ್ವಾಮಿ, ಶ್ರೀನಿವಾಸ್, ಶ್ರೀನಾಥ್, ಶ್ರೀಕಾಂತ, ಮುರಳಿ, ಸುಧನ್ವ ಭಾರದ್ವಾಜ್, ನಾಡಗೌಡ ಬಿ.ಸಿ.ಪಾರ್ಥಸಾರಥಿ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಬನ್ನೂರಿನಲ್ಲಿ ಶ್ರೀ ಕೋದಂಡರಾಮದೇವರ ಬ್ರಹ್ಮ ರಥವನ್ನು ಭಕ್ತರು ಎಳೆದರು.

 

ಪ್ರತಿನಿಧಿ ಬನ್ನೂರು

ನಾವೆಲ್ಲರೂ ಈ ಬಾರಿ  ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜ್ ಗೆ ಮತ ನೀಡುವ ಮೂಲಕ ದೇಶದ ಅಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತಿರುವ ಮೋದಿಜೀ ಅವರ ಕೈ ಬಲಪಡಿಸೋಣ ಎಂದು ಕರ್ನಾಟಕ ರಾಜ್ಯ ಜೆಡಿಎಸ್ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ತಿಳಿಸಿದರು.

ಪಟ್ಟಣ ಸಮೀಪದ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜ್ ಪರವಾಗಿ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.

ಮೋದಿ ಅವರ ಹತ್ತು ವರ್ಷದ ಅಭಿವೃದ್ದಿ ಪರ ಕಾರ್ಯ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಸರಳತೆಯನ್ನು ತಿಳಿಸಿದರು.

ರಾಜ್ಯದಲ್ಲಿ ಎಲ್ಲರೂ ಅತ್ಯಧಿಕ ಮತ ನೀಡಿ ಕಾಂಗ್ರೆಸ್  ಅಧಿಕಾರಕ್ಕೆ ತಂದು ಅದರಿಂದ ಆಗುತ್ತಿರುವ ಅಚಾತುರ್ಯಗಳು ಜನರ ಕಣ್ಣ ಮುಂದೆ ಇದ್ದು, ಮುಂದಿನ ದಿನಗಳಲ್ಲಿ ನಾವೆಲ್ಲರೂ ಎಂದಿಗೂ ಇಂತಹ ತಪ್ಪನ್ನು ಮಾಡದೆ, ಉತ್ತಮ ರೀತಿಯಲ್ಲಿ ರಾಷ್ಟ್ರವನ್ನು ಕಟ್ಟಿ ಬೆಳೆಸುತ್ತಿರುವ  ಮೋದಿ ಅವರ ಆದರ್ಶಕ್ಕೆ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಲಹೆಯಂತೆ ಒಗ್ಗಟ್ಟಿನಿಂದ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಮತದಾರರಿಗೆ ತಿಳಿಸಿದರು.

ಡಾ. ಮಲ್ಲಿಕಾರ್ಜುನ, ಹೇಮಂತ್ ಕುಮಾರ್, ಸಂತೋಷ್ ಕುಮಾರ್, ದರ್ಶನ್, ಸಾಗರ್, ವೈ.ಎಲ್.ಪುಟ್ಟಪ್ಪ, ಮಹದೇವು, ನಾಗೇಂದ್ರ(ಹೋಮ್), ಶಿವಶಕ್ತಿ, ಚಂದ್ರಶೇಖರ್, ಶಿವಕುಮಾರ್, ಯೋಗೇಶ್, ಕಿಟ್ಟಿ, ಮರಿಸಿದ್ದು, ಮಹೇಶ್ ಕುಮಾರ್, ವೈ.ಕೆ.ನವೀನ್, ನಾಗೇಶ್, ಪುಟ್ಟರಾಜು, ಗದ್ದೇಗೌಡ, ಸುಬ್ಬೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

  • ಬನ್ನೂರಿನ ಸಮೀಪದ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಜೆಡಿಎಸ್ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ಮತಯಾಚನೆ ಮಾಡಿದರು.
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮೈಸೂರು ಗ್ರಾಮಾಂತರಮೈಸೂರು ನಗರ

ನಿಯಮ ಪಾಲಿಸದ, ವೈದ್ಯಕೀಯ ಅನುಮತಿ ಪಡೆಯದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ -ಮೈಸೂರು ಡಿಹೆಚ್​ಓ

December 22, 2023
ಜಿಲ್ಲೆಮೈಸೂರು ಗ್ರಾಮಾಂತರಮೈಸೂರು ನಗರ

ಚಾಮುಂಡಿ ಬೆಟ್ಟದ ಏಕಾಶಿಲಾ ನಂದಿ ವಿಗ್ರಹಕ್ಕೆ ಮಹಾಭಿಷೇಕ

December 3, 2023
ಮೈಸೂರು ಗ್ರಾಮಾಂತರ

ಎಲ್ ಎಚ್ ವಿ ಉತ್ತಮ ಸೇವೆ ಮಾಡಿದ್ದಾರೆ

April 1, 2024
ಮೈಸೂರು ಗ್ರಾಮಾಂತರ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಗ್ಯಾರಂಟಿ ಇಲ್ಲ

April 22, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?