PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿದ್ದು ಬಿಜೆಪಿ ಪಕ್ಷ : ಎಚ್ ಸಿ ಎಂ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮೈಸೂರು ಗ್ರಾಮಾಂತರ > ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿದ್ದು ಬಿಜೆಪಿ ಪಕ್ಷ : ಎಚ್ ಸಿ ಎಂ
ಮೈಸೂರು ಗ್ರಾಮಾಂತರ

ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿದ್ದು ಬಿಜೆಪಿ ಪಕ್ಷ : ಎಚ್ ಸಿ ಎಂ

ಪ್ರತಿನಿಧಿ
Last updated: April 23, 2024 4:32 pm
ಪ್ರತಿನಿಧಿ
Published April 23, 2024
Share
SHARE

*ದೊಡ್ಡ ಕವಲಂದೆಯಲ್ಲಿ ಎಚ್.ಸಿ. ಮಹದೇವಪ್ಪ ವಾಗ್ದಾಳಿ

ಪ್ರತಿನಿಧಿ ವರದಿ ನಂಜನಗೂಡು

ಬಿಜೆಪಿ ಧರ್ಮ- ಧರ್ಮಗಳ ನಡುವೆ ಅಪನಂಬಿಕೆಯನ್ನು ಮೂಡಿಸಿ, ಮನು ವಾದವನ್ನು ಸೃಷ್ಟಿಸಿ, ಕಂದಕ ನಿರ್ಮಾಣ ಮಾಡಿ, ಸಮಾಜವನ್ನು ಒಡೆಯುವ ಕೆಲಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ. ಮಹದೇವಪ್ಪ ವಾಗ್ದಾಳಿಯನ್ನು ನಡೆಸಿದರು.

ತಾಲೂಕಿನ ದೊಡ್ಡಕವಲಂದೆ ಗ್ರಾಮದ ರೋಡ್ ಶೋನಲ್ಲಿ ಅವರು ಮಾತನಾಡಿದರು.

- ಜಾಹೀರಾತು -

ಸ್ವಾತಂತ್ರ್ಯ ಬಂದು ಸಂವಿಧಾನ ಒಪ್ಪಿಕೊಳ್ಳುವ ಸಂದರ್ಭದಲ್ಲಿ ಅನೇಕ ಧರ್ಮ, ಭಾಷೆ, ಆಚಾರ ವಿಚಾರ, ಉಡುಗೆ -ತೊಡುಗೆ, ಆಹಾರ ಪದ್ಧತಿಗಳು ವಿಭಿನ್ನವಾಗಿದ್ದರೂ ನಾವೆಲ್ಲ ಒಂದೇ ಭಾರತೀಯರು. ಆದರೆ ಬಿಜೆಪಿ 10 ವರ್ಷ ಅಧಿಕಾರ ಮಾಡಿ, ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವ ತೋರದೆ, ನಾವು ಹೇಳಿದ್ದಂತೆ ಕೇಳಬೇಕು. ನಾವು ಹೇಳಿದ ಬಟ್ಟೆ ಹಾಕಬೇಕು. ನಾವು ಹೇಳಿದ ಆಹಾರ ತಿನ್ನಬೇಕು ಎಂದು ಹೇಳಿ ಸಂವಿಧಾನವನ್ನು ಮೂಲೆಗುಂಪು ಮಾಡಿ ಕೋಮುವಾದದ ಹುಣ್ಣಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಎ ಜಾರಿಗೆ ತಂದಿರೋದು ಮೊದಲು ಅಲ್ಪಸಂಖ್ಯಾತರು, ನಂತರ ದಲಿತರು, ಹಿಂದುಳಿದ ವರ್ಗದವರನ್ನು ಗುಲಾಮರನ್ನಾಗಿ ಮಾಡಿ, ಮತ್ತೆ ಮನುವಾದವನ್ನು ಜಾರಿಗೆ ತರುವ ಪ್ರಯತ್ನವಾಗಿದೆ. ಪ್ರಜಾಪ್ರಭುತ್ವ ಇಲ್ಲದೆ ಇದ್ದಲ್ಲಿ ನಾವೆಲ್ಲರೂ ಪ್ರಾಣಿ ಪಕ್ಷಿಗಳ ರೀತಿ ಬದುಕನ್ನು ಸಾಗಿಸಬೇಕಾಗುತ್ತದೆ ಎಂದರು.

ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳಾದ ಹೆಡಿಯಾಲ, ಹುರ, ಹುಲ್ಲಹಳ್ಳಿ, ಹೆಡೆತಲೆ, ಹೆಮ್ಮರಗಾಲ, ಕಳಲೆ, ಬದನವಾಳು, ನೇರಳೆ, ಬಳಿಕ ದೊಡ್ಡಕವಲಂದೆ ಗ್ರಾಮದಲ್ಲಿ ಪುತ್ರ ಸುನಿಲ್ ಬೋಸ್ ಪರ ರೋಡ್ ಶೋ ನಡೆಸಿ ಮತವನ್ನು ಕೇಳಿದರು.

ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಎಸ್. ಸಿ. ಬಸವರಾಜು, ಇಂಧನ್ ಬಾಬು, ಲತಾ ಸಿದ್ದಶೆಟ್ಟಿ, ದೊರೆಸ್ವಾಮಿ ನಾಯಕ, ಮಾರುತಿ, ಕುರಹಟ್ಟಿ ಮಹೇಶ್, ಅಳಗಂಚಿ ಮಹೇಶ್, ಬುಲೆಟ್ ಮಹಾದೇವಪ್ಪ, ನಾಗೇಶ್ ರಾಜು, ಕವಲಂದೆಯ ಕಲೀಲ್, ಅಜಾಮುಲ್ಲಾಖಾನ್, ನಸ್ರುಲ್ಲಕಾನ್, ರಾಹುಲ್, ಎಂ. ಮಹಾದೇವಯ್ಯ, ಗುರುಪಾದಪ್ಪ, ಹೊನ್ನಪ್ಪ, ಸಿದ್ದಲಿಂಗಪ್ಪ, ಸ್ವಾಮಿ, ಕೃಷ್ಣ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮೈಸೂರು ಗ್ರಾಮಾಂತರ

ಹನಗೋಡಿನಲ್ಲಿ ಮಹದೇಶ್ವರ ದೇವರ ಮೆರವಣಿಗೆ

March 27, 2024
ಮುಖಪುಟಮೈಸೂರು ಗ್ರಾಮಾಂತರರಾಜಕೀಯ

ತಂದೆಯ ಕ್ಷೇತ್ರದಲ್ಲಿ ಪುತ್ರನ ಸಂಚಾರ ; ವರುಣ ವಿಧಾನಸಭೆ ಕ್ಷೇತ್ರದಲ್ಲಿ ಎಂಎಲ್ಸಿ., ಡಾ. ಯತೀಂದ್ರ ರೌಂಡ್ಸ್

June 17, 2025
ಮೈಸೂರು ಗ್ರಾಮಾಂತರ

ಎನ್. ರಾಚಯ್ಯರ ಭಾವಚಿತ್ರ ಅಳವಡಿಸಿ

June 27, 2024
ಮುಖಪುಟಮೈಸೂರು ಗ್ರಾಮಾಂತರಮೈಸೂರು ನಗರ

ಮೈಸೂರಿನಲ್ಲಿ ಪ್ರಯಾಣಿಕರಿಂದಲೇ ಸಾರಿಗೆ ಬಸ್ ಸ್ಟಾರ್ಟ್! ತಾಂತ್ರಿಕ ದೋಷದಿಂದ ಕೈ ಕೊಟ್ಟ ಬಸ್ ಅನ್ನು ತಳ್ಳಿ ನಿಲ್ಲಿಸಿದ ಪ್ರಯಾಣಿಕರು!

October 30, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?