PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಅಕ್ರಮವಾಗಿ ಖಾತೆ ಬದಲಾವಣೆ ಆರೋಪ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಚಾಮರಾಜನಗರ > ಅಕ್ರಮವಾಗಿ ಖಾತೆ ಬದಲಾವಣೆ ಆರೋಪ
ಚಾಮರಾಜನಗರ

ಅಕ್ರಮವಾಗಿ ಖಾತೆ ಬದಲಾವಣೆ ಆರೋಪ

ಪ್ರತಿನಿಧಿ
Last updated: May 24, 2024 4:23 pm
ಪ್ರತಿನಿಧಿ
Published May 23, 2024
Share
SHARE
  • ನಗರಸಭೆಯ ಹಿಂದಿನ ಪೌರಾಯುಕ್ತ ಎಸ್.ನಂಜುಂಡಸ್ವಾಮಿ ಸೇರಿ ನಾಲ್ವರಿಗೆ ಡಿಎಂಎ ನೋಟೀಸ್ ಜಾರಿ

ಪ್ರತಿನಿಧಿ ವರದಿ ಚಿಕ್ಕಮಾಳಿಗೆ ಕೊಳ್ಳೇಗಾಲ

ಪಟ್ಟಣದ ಉದಯರಂಗ(ಬಿಎಲ್‌ಎ) ಶೆಡ್ ಜಾಗದ ಏಕ ನಿವೇಶನವನ್ನು ಅಕ್ರಮವಾಗಿ ಬಹು ನಿವೇಶನಗಳಾಗಿ ವಿಂಗಡಿಸಿ ಹಕ್ಕು ಬದಲಾವಣೆ ಮಾಡಿಕೊಟ್ಟಿರುವ ಪ್ರಕರಣ ಕುರಿತು ನಗರಸಭೆಯ ನಗರಸಭಾ ಕಚೇರಿ ವ್ಯವಸ್ಥಾಪಕ ಬಿ.ನಿಂಗರಾಜು, ಬಿಲ್ ಕಲೆಕ್ಟರ್ ಮನಿಯಾ ಹಾಗೂ ಗ್ರೂಪ್ ಡಿ ನೌಕರ ಪ್ರಭಾಕರ್ ನೋಟೀಸ್ ಪಡೆದವರಾಗಿದ್ದು, ಇವರಿಂದ ಕರ್ನಾಟಕ ನಾಗರೀಕ ಸೇವಾ(ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾಳಿ 1957ರ ನಿಯಮ 11ನೇ ನಿಯಮದಂ ಮೇರೆಗೆ ಕಾರಣ ಕೇಳುವ ನೋಟೀಸ್ ಇದಾಗಿದೆ.

ಈ ವಿಚಾರದಲ್ಲಿ ಸದರಿ ನೌಕರರು ಈ ನೋಟಿಸ್ ತಲುಪಿದ 15 ದಿನಗಳ ಒಳಗಾಗಿ ಈ ಬಗ್ಗೆ ಹೇಳಿಕೆ ಏನಾದರೂ ಇದ್ದಲ್ಲಿ ಲಿಖಿತ ಉತ್ತರವನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದು, ಇವರು ಲಿಖಿತ ಉತ್ತರ ಸಲ್ಲಿಸದಿದ್ದಲ್ಲಿ ಇವರ ಹೇಳಿಕೆ ಏನು ಇಲ್ಲವೆಂದು ಪರಿಗಣಿಸುವ ಪೌರಾಡಳಿತ ನಿರ್ದೇಶಕರು ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಿದ್ದಾರೆ.

ಪ್ರಕರಣದ ಹಿನ್ನೆಲೆ: ಕೊಳ್ಳೇಗಾಲದ ಬಿಎಲ್‌ಎ ಬಸ್ ಶೆಡ್ ಆಸ್ತಿಯ ಮಾಲೀಕರಾಗಿದ್ದ ಎಂ.ವಿ.ಸುಬ್ರಹ್ಮಣ್ಯಂ ಅವರ (ಅ.ಸಂಖ್ಯೆ 559ರಲ್ಲಿ ಒಟ್ಟು 19,528 ಚದುರಡಿ) ಅವರ ಆಸ್ತಿಯನ್ನು ಅವರ ಪತ್ನಿ ಉಷಾ ಹಾಗೂ ಎಂ.ನಾಗೇಂದ್ರ ಪ್ರಸಾದ್, ಕೆ.ಎಸ್.ಶೇತಾ ಹಾಗೂ ಚಂದ್ರಕಾಂ ತಮ್ಮ ಅವರ ಹೆಸರಿಗೆ 2022 ಮೇ ವೇಳೆ ಹಿಂದಿನ ಪೌರಾಯುಕ್ತ ಎಸ್.ನಂಜುಂಡಸ್ವಾಮಿ(ಹಾಲಿ ನಂಜನಗೂಡು ನಗರಸಭೆ ಪೌರಾಯುಕ್ತರು) ಹಕ್ಕು ಬದಲಾವಣೆ ಮಾಡಿದ್ದರು.

- ಜಾಹೀರಾತು -

ಈ ವೇಳೆ ಹಿಂದಿನಿಂದಲೂ ಪುರಸಭೆಗೆ ಸೇರಿದ ಅ.ನಂ.541/ಎರ ಬಾವಿ ಹಾಗೂ 9×19 ಮೀ. ಅಳತೆಯ ಸರ್ಕಾರಿ ನಿವೇಶನವನ್ನು ಅಕ್ರಮವಾಗಿ ಇವರ ಹೆಸರಿಗೆ ಸೇರಿಸಿ ಖಾತೆ ಮಾಡಿಕೊಡಲಾಗಿದೆ ಎಂಬುದಾಗಿ ನಗರಸಭಾ ಸದಸ್ಯ ಜಿ.ಪಿ.ಶಿವಕುಮಾರ್ ಡಿಸಿಗೆ ನೀಡಿದ್ದ ದೂರಿನ್ವಯ ಇದೀಗ ಖಾತೆ ಮಾಡಿಕೊಟ್ಟ ಅಧಿಕಾರಿ ಮತ್ತು ಮೂವರು ಸಿಬ್ಭಂದಿಗಳ ಕುರಿತು 2022 ಅ.6 ರಂದು ಜಿಲ್ಲಾಧಿಕಾರಿ, ಕೊಳ್ಳೇಗಾಲಕ್ಕೆ ತನಿಖಾ ತಂಡ ಕಳುಹಿಸಿ, ಹಕ್ಕು ಬದಲಾವಣೆ ಖಡತಗಳನ್ನು ಪರಿಶೀಲಿಸಿದ್ದರು.

ತನಿಖೆ ವೇಳೆ ಇಲ್ಲಿ ಹಕ್ಕು ಬದಲಾವಣೆಯಲ್ಲಿ ಸಾಕಷ್ಟು ನಿಯಮ ಉಲ್ಲಂಘಿಸಿ, ಆತುರಾತುವಾಗಿ ಖಾತೆ ಬದಲಾಯಿಸಿರುವುದರಿಂದ ಲಕ್ಷಾಂತರ ರೂ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವುದು ದೃಢಪಟ್ಟಿತ್ತು. ಈ ಕುರಿತು ಪ್ರಸ್ತಾಪಿಸಿರುವ ಪೌರಾಡಳಿತ ನಿರ್ದೇಶನಾಲಯ ಏ.2 ರಂದು ಆರೋಪಿತ ಅಧಿಕಾರಿಗಳಿಗೆ 1 ಟೂ 4 ನೋಟಿಸ್ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

23ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದ ಬಿಎಲ್‌ಎ ಶೆಡ್ ಜಾಗದ ಏಕ ನಿವೇಶನವನ್ನು ಅಕ್ರಮವಾಗಿ ಬಹು ನಿವೇಶನಗಳಾಗಿ ವಿಂಗಡಿಸಿ ಹಕ್ಕು ಬದಲಾವಣೆ ಮಾಡಿಕೊಟ್ಟಿರುವ ಪ್ರಕರಣ ಕುರಿತು ಹಿಂದಿನ ಪೌರಾಯುಕ್ತ ಎಸ್.ನಂಜುAಡಸ್ವಾಮಿ ಹಾಗೂ ಗ್ರೂಪ್ ಡಿ ನೌಕರ ಪ್ರಭಾಕರ್ ಅವರಿಗೆ ಪೌರಾಡಳಿತ ನಿರ್ದೇಶಾನಲಯ ಅನುಬಂಧ-1 ರಿಂದ 4ರವರೆಗೆ ಜಾರಿ ಮಾಡಿರುವ ನೋಟೀಸ್ ಜಾರಿ ಪ್ರತಿ ಇದೆ ಹಾಗೂ ಅಧಿಕಾರಿಗಳ ಫೋಟೋ ಇದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಚಾಮರಾಜನಗರಮುಖಪುಟ

PODCAST : ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಮಾಡಿದ್ದ 102 ವರ್ಷದ ವೃದ್ಧೆಗೆ ಸನ್ಮಾನ

March 9, 2024
ಚಾಮರಾಜನಗರ

ಮತದಾನ ಜಾಗೃತಿ ಜಾಥಾಗೆ ಚಾಲನೆ

April 2, 2024
ಚಾಮರಾಜನಗರಚುನಾವಣೆಮುಖಪುಟರಾಜಕೀಯ

ಗಲಭೆಯಾಗಿದ್ದ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಸೋಮವಾರ ಮರುಮತದಾನ

April 28, 2024
ಚಾಮರಾಜನಗರ

ಮೈಸೂರು ವಾರಿಯರ್ಸ್ ತಂಡದಿಂದ ಅರಿವು

April 7, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?