PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಆಲಂಬಾಡಿ ಗ್ರಾಮದ ಸೋಲಿಗರ ಪೋಡಿನ ವಾಸ್ತವ ಸ್ಥಿತಿ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಚಾಮರಾಜನಗರ > ಆಲಂಬಾಡಿ ಗ್ರಾಮದ ಸೋಲಿಗರ ಪೋಡಿನ ವಾಸ್ತವ ಸ್ಥಿತಿ
ಚಾಮರಾಜನಗರ

ಆಲಂಬಾಡಿ ಗ್ರಾಮದ ಸೋಲಿಗರ ಪೋಡಿನ ವಾಸ್ತವ ಸ್ಥಿತಿ

ಪ್ರತಿನಿಧಿ
Last updated: May 30, 2024 8:15 pm
ಪ್ರತಿನಿಧಿ
Published May 30, 2024
Share
SHARE
  • ಮೂಲ ಸೌಲಭ್ಯಗಳಿಲ್ಲದೆ ಜನರು ಕಾಡು ಪ್ರಾಣಿಗಳಂತೆ ವಾಸ ಮಾಡುವ ಪರಿಸ್ಥಿತಿ
  • ಅಧಿಕಾರಿಗಳು ಗಮನಹರಿಸಲು ಮನವಿ

ಸುರೇಶ್ ಅಜ್ಜೀಪುರ ಹನೂರು

ಓಡಾಡಲು ಸರಿಯಾದ ರಸ್ತೆಯಿಲ್ಲ, ವರ್ಷದಿಂದ ಕೆಟ್ಟು ನಿಂತಿರುವ ಸೋಲಾರ್ ದೀಪ, ಇರುವುದೊಂದೇ ಬಸ್, ಕುಡಿಯುವ ನೀರಿಗಾಗಿ ಕಳೆದ ವಾರದಿಂದ ಪರದಾಟ, ಕೆಟ್ಟು ನಿಂತಿರುವ ಕೈ ಪಂಪ್ ಇದು ಆಲಂಬಾಡಿ ಗ್ರಾಮದ ಸೋಲಿಗರ ಪೋಡಿನ ವಾಸ್ತವ ಸ್ಥಿತಿ.

ತಾಲೂಕಿನ ಗಡಿ ಗ್ರಾಮ ಪಂಚಾಯಿತಿ ಗೋಪಿನಾಥಮ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಲಂಬಾಡಿ ಗ್ರಾಮವು ಗಡಿಗ್ರಾಮವಾಗಿದ್ದು ಇಲ್ಲಿ ಸೋಲಿಗ ಸಮುದಾಯದ ಜನರು ಹಾಗೂ ಇತರೆ ಜನಾಂಗದ ಜನರು ಸಹ ಬದುಕುತ್ತಿದ್ದಾರೆ. ಆದರೇ ಮೂಲ ಸೌಲಭ್ಯಗಳಿಲ್ಲದೆ ಜನರು ಕಾಡು ಪ್ರಾಣಿಗಳಂತೆ ವಾಸ ಮಾಡುತ್ತಿದ್ದಾರೆ.

ಕುಡಿಯುವ ನೀರಿಗಾಗಿ ಪರದಾಟ: ಸೋಲಿಗರ ಹಾಡಿಯಲ್ಲಿ 130 ಕ್ಕು ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು ಇವರಿಗೆ ಒಂದೇ ಒಂದು ಕೈ ಪಂಪು ಮಾತ್ರ ಇದ್ದು ಅದು ಸಹ ಕೆಟ್ಟು ನಿಂತಿದೆ ಇದರಿಂದ ಅಲ್ಲಿನ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದೂ ಕೈ ಪಂಪ್ ಸರಿಪಡಿಸುವಂತೆ ಸಾಕಷ್ಟು ಬಾರಿಗ್ರಾಮ ಪಂಚಾಯಿತಿಗೆ  ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ ಈಗ  ಕುಡಿಯುವ ನೀರಿಲ್ಲದೆ ಅಲ್ಲಿನ ಜನರು ಕೆರೆ ಹಾಗೂ ಹಳ್ಳದ ನೀರನ್ನು ಆಶ್ರಯ ಮಾಡಿಕೊಂಡಿದ್ದಾರೆ. ಹಳ್ಳಕ್ಕೆ ವಾಸ ಮಾಡುವ ಸ್ಥಳದಿಂದ ಕಿಮೀ ಗಟ್ಟೆಲೆ ನಡೆದೆ ತೆರಳಬೇಕು ಜೊತೆಗೆ ತಲೆ ಮೇಲೆ ಅಲ್ಲಿಂದ ನೀರನ್ನು ಹೊತ್ತು ತರಬೇಕು ಆಗಿದ್ದರು ಆ ನೀರನ್ನು ಕುಡಿದರೆ  ರೋಗ ರುಜಿನಕ್ಕೆ ತುತ್ತಾಗುವ ಸಂಭವವಿದ್ದು ಚಿಕ್ಕ ಮಕ್ಕಳು ವಯೋ ವೃದ್ಧರು ಇದೆ ನೀರನ್ನು ಕಳೆದ ವಾರದಿಂದ ಕುಡಿಯುತ್ತಿದ್ದೂ ರೋಗಕ್ಕೆ ತುತ್ತಾಗುವ ಸಂಭವವಿದ್ದು ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ರಾಜಮ್ಮ, ವಿಜಯ, ಚಿತ್ರ ಇನ್ನಿತರರು  ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇರುವುದೊಂದೇ ಕೈ ಪಂಪ್: ಸೋಲಿಗರ ಹಾಡಿಯಲ್ಲಿ 130 ಕುಟುಂಬ ವಾಸ ಮಾಡುತ್ತಿದ್ದಾರೆ ಆದರೇ ಒಂದೇ ಒಂದು ಕೈ ಪಂಪ್ ಅಷ್ಟು ಕುಟುಂಬಗಳ ದಾಹ ನೀಗಿಸುತ್ತಿದೆ ಇದೀಗ ಇರುವುದೊಂದು ಕೈ ಪಂಪ್ ಕೆಟ್ಟು ನಿಂತಿದ್ದು ಇದೀಗ ಹಳ್ಳದ ನೀರೇ ಗತಿಯಾಗಿದೆ. ಇದರಿಂದ ಇನ್ನೆರಡು ಬೋರ್ ವೆಲ್ ಕೊರೆಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಸೋಲಾರ್ ದುರಸ್ಥಿಗೊಳಿಸಿ: ಹಾಡಿಯಲ್ಲಿ ಸೋಲಾರ್ ದೀಪ  ಬೀದಿಯಲ್ಲೂ ಅಳವಡಿಸಿದ್ದು ಮನೆಗಳಿಗೆ ಅಳವಡಿಸಿದ್ದಾರೆ ಆದರೇ ಸೋಲಾರ್ ದೀಪ ಕೆಟ್ಟು ನಿಂತು ತಿಂಗಳೇ ಕಳೆದರೂ ಸಹ ಇನ್ನು ರೆಡಿ ಮಾಡಿಸುವ ಗೋಜಲಿಗೆ ಹೋಗಿಲ್ಲ ಹಾಗಾಗಿ ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಕಾಡು ಪ್ರಾಣಿಗಳ ಹಾವಳಿಯಲ್ಲೇ ದಿನದೂಡುತ್ತಿದ್ದಾರೆ ಹಾಗಾಗಿ ಮುಂದಾದರು ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಸ್ತೆ ದುರಸ್ಥಿ ಪಡಿಸಿ: ಪ್ರವಾಸಿ ತಾಣ ಹೊಗೇನಕಲ್ ಗ್ರಾಮದಿಂದ ಆಲಂಬಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಮಣ್ಣಿನ ರಸ್ತೆಯಾಗಿದ್ದು ರಸ್ತೆಯು ತೀರಾ ಹದಗೆಟ್ಟಿದೆ ಇದರಿಂದ ವಾಹನಗಳು ಸಂಚಾರ ಮಾಡಲು ಸಹ ಆಗುವುದಿಲ್ಲ ಹಾಗಾಗಿ ಮಣ್ಣಿನ ರಸ್ತೆಯನ್ನಾದರೂ ದುರಸ್ಥಿ ಮಾಡಿಕೊಳ್ಳಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ?

————

ಆಲಂಬಾಡಿ ಸೋಲಿಗರ ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಇದೀಗ ನನ್ನ ಗಮನಕ್ಕೆ ಬಂದಿದ್ದು ತುರ್ತಾಗಿ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿರುತ್ತೇವೆ.

। ಮಂಜುಳಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಚಾ.ಜನಗರ

ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಕಾರ ಉಂಟಾಗಿದ್ದು ಇರುವ ಒಂದೇ ಕೈ ಪಂಪ್ ಹಾಳಾಗಿದ್ದು ಸಾಕಷ್ಟು ಬಾರಿ ಮನವಿ ಮಾಡಿದ್ದರು ಸಹ ಪ್ರಯೋಜನವಾಗಿಲ್ಲ.

। ವಿಜಯ, ಗ್ರಾಮಸ್ಥರು ಆಲಂಬಾಡಿ

ಆಲಂಬಾಡಿ ಸೋಲಿಗರ ಹಾಡಿಯಲ್ಲಿರುವ ಕೈ ಪಂಪ್ ಕೆಟ್ಟಿರುವುದು ನನ್ನ ಗಮನಕ್ಕೆ ಇದೀಗ ಬಂದಿದ್ದು ರಿಪೇರಿ ಮಾಡಿಸಲು ಹಾಗೂ ಸೋಲಾರ್ ದುರಸ್ಥಿ ಗೊಳಿಸಲು  ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ.

। ರಾಜಕುಮಾರ್ ಪಿಡಿಒ ಗೋಪಿನಾಥಮ್ ಗ್ರಾಮ ಪಂಚಾಯಿತಿ

ಪೋಟೋ:

ಚಿತ್ರ : ಆಲಂಬಾಡಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ಕೆರೆಯ ನೀರನ್ನು ಕುಡಿಯುತ್ತಿರುವುದು.

ಚಿತ್ರ : ಆಲಂಬಾಡಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಕೈ ಪಂಪ್

ಚಿತ್ರ : ಕೆಟ್ಟು ನಿಂತಿರುವ ಸೋಲಾರ್ ಬೀದಿ ದೀಪ

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಚಾಮರಾಜನಗರ

ಶೀಘ್ರದಲ್ಲೇ ಜಿಲ್ಲಾ ಸಮಿತಿಯ ಉದ್ಘಾಟನೆ

May 29, 2024
ಚಾಮರಾಜನಗರಜಿಲ್ಲೆಮುಖಪುಟ

ವಿಷಪೂರಿತ ಕಾಯಿ ತಿಂದು ಮಕ್ಕಳು ಸೇರಿದಂತೆ 12 ಮಂದಿ ಕೂಲಿ ಕಾರ್ಮಿಕರು ಅಸ್ವಸ್ಥ

November 28, 2024
ಚಾಮರಾಜನಗರ

ಯೋಗಕ್ಷೇಮ ಕೇಂದ್ರದಲ್ಲಿ ಮತದಾನ ಜಾಗೃತಿ

April 5, 2024
ಚಾಮರಾಜನಗರ

ಯುಗಾದಿ ಜಾತ್ರೆಗೆ ಸಕಲ ಸಿದ್ಧತೆ

April 5, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?